Sunday 29 October 2017

ಮನುಷ್ಯನ ಗುಣ






ಮೌನೇಶ್ ಎಸ್. ಬಡಿಗೇರ್






ತಿಪ್ಪೆ ಮೇಲೆ
ಸ್ವತಂತ್ರವಾಗಿ ಬೆಳೆವ ಸಸಿ
ಹೆಮ್ಮರವಾಗಿ ಬೆಳೆದು
ಇನ್ನೊಬ್ಬರಿಗೆ
ನೆರಳ ನೀಡಬಲ್ಲದು..!
ಉಪ್ಪರಿಗೆಯಲಿ ಅಂದಕೆ
ಹಂಗಿನಲಿ ಆರೈಕೆಯಾಗಿ













ಬೆಳೆದ ಸಸಿ
ದಾಸ್ಯದಲಿ, ರೋಷದಲಿ
ನರಳಿ ಸಾಯುವುದು..!!
ಅದು ಅಂದಕಾಗಿ, ಗರ್ವಕಾಗಿ
ಇರುವೆನೆಂದು
ಬೀಗಬಲ್ಲದೆ ಹೊರತು
ನೆರಳಾಗಿ ಬದುಕಲಾರದು..!!

No comments:

Post a Comment